top of page

ರುಚಿಯುತ ಭೋಜನ ಅನುಭವ
ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ತನ್ನದೇ ಶೈಲಿಯ ಊಟ ದೊರೆಯುವುದು ನಮಗೆಲ್ಲ ಗೊತ್ತು.
ಕನ್ನಡ ಕೂಟದ ಸುವರ್ಣ ಮಹೋತ್ಸವದ ಪರ್ವದಲ್ಲಿ ಪ್ರತಿ ಹೊತ್ತಿಗೂ ಕರ್ನಾಟಕದ ವೈವಿಧ್ಯಮಯ ಊಟದ ಬಗೆಯನ್ನು ನಿಮಗೆಲ್ಲ ಬಡಿಸಲಾಗುವುದು

ಭೋಜನ ಸಂಭ್ರಮ
ಒಂದು ದಿನ ಹೋಳಿಗೆ ಊಟವಾದರೆ, ಇನ್ನೊಂದು ಹೊತ್ತಿಗೆ ಮೈಸೂರು ಪಾಕ್, ಗಸಗಸೆ ಪಾಯಸ ಬರಬಹುದು. ಬಜ್ಜಿ, ಪಕೋಡ ಇಲ್ಲದಿದ್ದರೆ ಹೇಗೆ? ರುಚಿ ರುಚಿಯಾದ ಬಿಸಿಬೇಳೆಭಾತ್, ಮೊಸರನ್ನ ಕೂಡ ಸಿಗಲೇಬೇಕು!!
ನಿರಂತರವಾಗಿ ಎರಡೂ ದಿನಗಳೂ, ಕೇಳಿದಾಗೆಲ್ಲ ಕಾಫಿ ಚಹಾ ಸರಬರಾಜು ಇದ್ದೇ ಇರುವುದು!!
ಎರಡು ದಿನ ಕರ್ನಾಟಕದ ರುಚಿ ರುಚಿಯಾದ ಊಟದ ವ್ಯವಸ್ಥೆ ಇರುವಾಗ ನೀವೆಲ್ಲ ಬರದಿದ್ದರೆ ಹೇಗೆ?
ಬನ್ನಿ! ತವರಿನ ರುಚಿಯನ್ನು ಆಸ್ವಾದಿಸುತ್ತಾ ಸುವರ್ಣ ಮಹೋತ್ಸವದಲ್ಲಿ ಕಣ್ಣಿನೊಂದಿಗೆ ಹೊಟ್ಟೆಗೂ ಹಬ್ಬವಾಗಿಸಿ!
bottom of page